2016 ರಲ್ಲಿ, ಒಂದು ದಿನ, ಕ್ಷೇತ್ರ ಪರಿಸರ ವಿಜ್ಞಾನಿ ವಿಘ್ನೇಶ್ ಕಾಮತ್ ಅವರು ತಮಿಳುನಾಡಿನ ಕಾಲಕ್ಕಾಡ್ ಮುಂಡಂತುರೈ ಹುಲಿ ಅಭಯಾರಣ್ಯದಲ್ಲಿ (ಕೆಎಂಟಿಆರ್) ಕಪ್ಪೆಗಳನ್ನು ಅಧ್ಯಯನ ಮಾಡುತ್ತಿದ್ದಾಗ, ಆಕಸ್ಮಿಕವಾಗಿ ಕಾಡಿನ ಮಧ್ಯೆ ನೀಲಗಿರಿ ಲಂಗೂರಿನ (ಬುಕ್ಕ/ಮುಸುವ/ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಉದ್ದನೆಯ ಬಾಲಹೊಂದಿರುವ ಕರಿಮೂತಿಯ ಕಪಿ) ಭಾಗಶಃ ತಿನ್ನಲಾಗಿದ್ದ ಶವವನ್ನು ಗಮನಿಸಿದರು. ಕುತೂಹಲಕಾರಿಯಾದ ಅವರು, ಈ ಕಪಿಯನ್ನು ಯಾವ ಪ್ರಾಣಿ ಈ ರೀತಿ ಭಕ್ಷಿಸಿದೆ ಎಂದು ನೋಡಬಯಸಿದರು.