ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

General

ಬೆಂಗಳೂರು
5 Aug 2020

ಏಷ್ಯಾದ ಮರಿಯಾನೆಯು ತನ್ನ ಬಾಯಿಯ ಬಲಭಾಗದಲ್ಲಿ ಹುಲ್ಲು ಇರಿಸಿಕೊಳ್ಳುತ್ತಿರುವುದು [ಚಿತ್ರ ಕೃಪೆ: ಟಿ. ರೇವತಿ]

ಬೆಂಗಳೂರು
31 Jan 2020

ಪಂಜಾಬ್ ನಲ್ಲಿ ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ, ಲಕ್ಷಾಂತರ ಹೆಕ್ಟೇರ್ ಭತ್ತದ ಗದ್ದೆಗಳಲ್ಲಿ ಭತ್ತವನ್ನು ಕೊಯ್ಲು ಮಾಡುವ ನೂರಾರು ಯಂತ್ರಗಳ ಸದ್ದನ್ನು ಕೇಳಬಹುದು. ಇನ್ನು, ಮಹಾರಾಷ್ಟ್ರದಲ್ಲಿನ ವಿದರ್ಭದ ಹಳ್ಳಿಗಳು ತಮ್ಮ ಹಿಮದಷ್ಟು ಬಿಳಿಯ ಹತ್ತಿರಾಶಿಯನ್ನು ಲೆಕ್ಕವಿಲ್ಲದಷ್ಟು ಮೂಟೆಗಳಲ್ಲಿ ತುಂಬಿ  ಮಾರುಕಟ್ಟೆಗೆ ಕಳಿಸುತ್ತಿರುತ್ತವೆ. ಹಲವು ವರ್ಷಗಳ ಹಿಂದೆ, ಇದೇ ಕೃಷಿಭೂಮಿಗಳು ವಿಸ್ತಾರವಾದ ಕಾಡುಗಳು, ಹುಲ್ಲುಗಾವಲುಗಳು, ಗದ್ದೆಗಳು ಮತ್ತು ಅನೇಕ ಬೆಳೆಗಳನ್ನುಆವರ್ತಿಯ ಆಧಾರದ ಮೇಲೆ ಬೆಳೆಸಲಾಗುವಂತಹ ಪ್ರದೇಶಗಳಾಗಿದ್ದವು.

ಬೆಂಗಳೂರು
21 ಮೇ 2020

ಇಲ್ಲೊಂದು ಚಿಲಿಪಿಲಿ, ಅಲ್ಲೊಂದು ವಾಹನದ ಹಾರ್ನ್! ಕೀಟಗಳ ಕಿರುಗುಡುವಿಕೆ,  ನಾಯಿಯ ಬೊಗಳುವಿಕೆ, ಚರ್ಚ್‌ನ ಗಂಟೆ ಮತ್ತು ವಿವಿಧ ಪಕ್ಷಿಗಳ ಕಲರವ -  ನಗರದಲ್ಲಿ ಇವೆಲ್ಲವೂ ಒಟ್ಟೊಟಿಗೆ ಕೇಳಿಸಬಹುದಾಗಿದ್ದು, ಇದೇ ಕಾರಣದಿಂದಲೇ ನಗರದಲ್ಲಿ ಪಕ್ಷಿಯಾಗಿ ಬದುಕುವುದು ಕಠಿಣಕಾರ್ಯ!. ಈ ಗಡಿಬಿಡಿಯ ಗಲಗಲದಲ್ಲಿ, ಸಂಗಾತಿಗೆ ಪಕ್ಷಿಯ ಕರೆ ಕೇಳಿಸುವುದು ಅಸಾಧ್ಯ! ಹಾಗಾಗಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು, ನಗರಗಳೂ ಸೇರಿದಂತೆ ಎಲ್ಲೆಡೆ, ಪಕ್ಷಿಗಳು ತಮ್ಮ ಸಮೂಹಗಾನದಲ್ಲಿ ಸಮಯ, ಆವಾಸಸ್ಠಾನ ಮತ್ತು ವಿಶಿಷ್ಟ ಸೂಚನೆ ನೀಡುವ ಸಲುವಾಗಿ ಕೂಗಿನ ಸಂಖ್ಯೆಯಲ್ಲಿ ಬದಲಾವಣೆ ತರುವ ವಿವಿಧ ತಂತ್ರಗಳನ್ನು ಬಳಸುತ್ತವೆ.

ಬೆಂಗಳೂರು
30 Apr 2020

ಮೂಲ ಲೇಖನ ಬರೆದವರು: ಜ್ಯೋತಿ ಶರ್ಮಾ  ಮತ್ತು ಎಸ್.ಕೆ.ವರ್ಶ್ನಿ, ಹಿರಿಯ ವಿಜ್ಞಾನಿಗಳು  ಮತ್ತು ಮುಖ್ಯಸ್ಥರು, ಅಂತರರಾಷ್ಟ್ರೀಯ ದ್ವಿಪಕ್ಷೀಯ ಸಹಕಾರ ವಿಭಾಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ     

ಬೆಂಗಳೂರು
22 Apr 2020

ಹವಾಮಾನ ವೈಪರೀತ್ಯದಿಂದ ಉಂಟಾಗುವ ಅನೇಕ ವಿಪತ್ತುಗಳ ಪೈಕಿ, ಮಣ್ಣಿನ ಲವಣಾಂಶದ ಹೆಚ್ಚಳವೂ ಒಂದು. 2050 ರ ಹೊತ್ತಿಗೆ, ಪ್ರಪಂಚದಾದ್ಯಂತ ಲಭ್ಯವಿರುವ ಇಂದಿನ ಕೃಷಿಯೋಗ್ಯ ಭೂಮಿಯ ಅರ್ಧದಷ್ಟು ಭಾಗವು ಲವಣಾಂಶದ ಏರುಪೇರಿನಿಂದ ಪ್ರಭಾವಿತವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಲವಣಾಂಶದ ಹೆಚ್ಚಳವು, ಭಾರತದ ಭತ್ತದ ಬಟ್ಟಲೆಂದೇ ಪ್ರಸಿದ್ಧವಾಗಿರುವ ಸಿಂಧೂ - ಗಂಗಾ ನದಿಗಳ ಒಡಲಿನ ಬಯಲು ಪ್ರದೇಶಕ್ಕೂ ಅಪಾರವಾದ ಹಾನಿ ಮಾಡಲಿದ್ದು, ಬೆಳೆ ಇಳುವರಿಯಲ್ಲಿ ಸುಮಾರು 45% ನಷ್ಟವನ್ನು ನಿರೀಕ್ಷಿಸಬಹುದಾಗಿದೆ. ಲವಣಾಂಶವು ಹೆಚ್ಚಾದಾಗ, ಸಸ್ಯಗಳು ಕಡಿಮೆ ನೀರನ್ನು ಹೀರಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತವೆ; ಅದು ಅವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಬೆಂಗಳೂರು
17 Apr 2020

ಬಾವಲಿಗಳು ತಮ್ಮ ಪಾಡಿಗೆ ತಾವು ರಾತ್ರಿಯಲ್ಲಿ ಹಾರಾಡುವ ಸಸ್ತನಿಗಳು. ಇವು ಪ್ರಪಂಚದಾದ್ಯಂತ ಹರಡಿದ್ದು, ಇವುಗಳಲ್ಲಿ ಸುಮಾರು ೧೨೦೦ ಪ್ರಭೇದಗಳಿವೆ. ಈಗಿನ ಲಾಕ್ ಡೌನ್ ಗೆ ಕಾರಣವಾಗಿರುವ ಕೋವಿಡ್-೧೯ ಸಾಂಕ್ರಾಮಿಕವನ್ನು ಬಾವಲಿಗಳು ಹರಡುತ್ತಿವೆ ಎಂದು ಜನರು ತಿಳಿದಿದ್ದಾರೆ. ಇದಕ್ಕೆ ಪೂರಕವಾಗಿ, ಕೆಲವೇ ದಿನಗಳ ಹಿಂದೆ, ICMR (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್)ನ  ಅಧ್ಯಯನವೊಂದು ದಕ್ಷಿಣ ಭಾರತದಲ್ಲಿ ಕಂಡುಬರುವ ಬಾವಲಿಗಳಲ್ಲಿ “ಬ್ಯಾಟ್-ಕೊರೊನ ವೈರಸ್” ಇದೆ ಎಂಬುದು ಬೆಳಕಿಗೆ ಬಂದಿದೆ. ಇದನ್ನೆಲ್ಲಾ ಓದಿದ ಜನ, ಭಯಭೀತರಾಗಿ ಕೆಲವೆಡೆ ಬಾವಲಿಗಳನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ. ಕೆಲವರಂತೂ ಮನೆ ಅಂಗಳದಲ್ಲಿರುವ ಸಪೋಟಾ, ಮಾವು ಹಾಗೂ ಬಾವಲಿಗಳು ಬರುವ ಇತರ ಗಿಡ-ಮರಗಳನ್ನು ಕಡಿಯುತ್ತಿದ್ದಾರೆ.

ಬೆಂಗಳೂರು
2 Apr 2020

ವರ್ಚಸ್ವಿ ಪ್ರಾಣಿಗಳಲ್ಲಿ ಒಂದಾದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಪ್ರಪಂಚದಾದ್ಯಂತ ಪ್ರಾಣಿಸಂರಕ್ಷಣೆಯ ಮುಖವಾಗಿ ಬಳಸಲಾಗುತ್ತಿದೆ. 2019 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂತರ್ರಾಷ್ಟ್ರೀಯ ಹುಲಿ ದಿನವಾದ ಜುಲೈ 29 ರಂದು 2018 ರ ರಾಷ್ಟ್ರೀಯ ಹುಲಿ ಗಣತಿ (ಎನ್‌ಟಿಇ) ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದರು. ಉದ್ದೇಶಿತ ಗಡುವಿಗೆ ನಾಲ್ಕು ವರ್ಷಗಳ ಮೊದಲೇ ಭಾರತವು ತನ್ನ ಹುಲಿ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು
26 Feb 2020

2016 ರಲ್ಲಿ, ಒಂದು ದಿನ,  ಕ್ಷೇತ್ರ ಪರಿಸರ ವಿಜ್ಞಾನಿ ವಿಘ್ನೇಶ್ ಕಾಮತ್ ಅವರು ತಮಿಳುನಾಡಿನ ಕಾಲಕ್ಕಾಡ್ ಮುಂಡಂತುರೈ ಹುಲಿ ಅಭಯಾರಣ್ಯದಲ್ಲಿ  (ಕೆಎಂಟಿಆರ್) ಕಪ್ಪೆಗಳನ್ನು ಅಧ್ಯಯನ ಮಾಡುತ್ತಿದ್ದಾಗ, ಆಕಸ್ಮಿಕವಾಗಿ ಕಾಡಿನ ಮಧ್ಯೆ ನೀಲಗಿರಿ ಲಂಗೂರಿನ (ಬುಕ್ಕ/ಮುಸುವ/ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಉದ್ದನೆಯ ಬಾಲಹೊಂದಿರುವ ಕರಿಮೂತಿಯ ಕಪಿ)  ಭಾಗಶಃ ತಿನ್ನಲಾಗಿದ್ದ ಶವವನ್ನು  ಗಮನಿಸಿದರು. ಕುತೂಹಲಕಾರಿಯಾದ ಅವರು, ಈ ಕಪಿಯನ್ನು ಯಾವ ಪ್ರಾಣಿ ಈ ರೀತಿ ಭಕ್ಷಿಸಿದೆ ಎಂದು ನೋಡಬಯಸಿದರು.

ಬೆಂಗಳೂರು
19 Feb 2020

ಪಕ್ಷಿ ವೀಕ್ಷಣೆ, ಪಕ್ಷಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ಗಮನಿಸುವ ಒಂದು ಕಲೆ. ಪಕ್ಷಿ ವೀಕ್ಷಣೆ, ಕೇವಲ ಪಕ್ಷಿಗಳನ್ನು ನೋಡುವುದಲ್ಲದೇ, ನಮ್ಮ ಆರಾಮ ವಲಯವನ್ನು ಮೀರಿ, ಅವುಗಳ ವೈವಿಧ್ಯಮಯ ಜಗತ್ತನ್ನು, ಅವುಗಳ  ವರ್ತನೆಯನ್ನು ತಾಳ್ಮೆಯಿಂದ ಗಮನಿಸುವುದು ಮತ್ತು ಕೆಲ ನಿಯಮಗಳನ್ನು ಪಾಲಿಸುವುದೂ ಒಳಗೊಂಡಿದೆ.  ಪಕ್ಷಿ ವೀಕ್ಷಣೆಯಲ್ಲಿ ವಯಸ್ಸು ಅಥವಾ ಅರ್ಹತೆಯ ನಿರ್ಬಂಧನೆಗಳಿಲ್ಲ ಹಾಗಾಗಿ ಎಲ್ಲರೂ ಆನಂದಿಸಬಹುದು. ಕೇವಲ ಅರಣ್ಯಗಳಲ್ಲದೇ, ನಮ್ಮ ಕಿಟಕಿಗಳೂ ಸಹ ಪಕ್ಷಿಗಳ ಜಗತ್ತಿನಲ್ಲಿ ಒಂದು ಇಣುಕು ನೋಟವನ್ನು ನೀಡಬಹುದು. ಸರಿಯಾದ ಮನಃಸ್ಥಿತಿಯೊಂದಿಗೆ ಕೆಲ ನಿಯಮಗಳನ್ನು ಪಾಲಿಸಿದಲ್ಲಿ ಪಕ್ಷಿ ವೀಕ್ಷಣೆ ದಿನನಿತ್ಯವೂ ಆಚರಿಸಬಲ್ಲಂತಹ ಒಂದು ಹಬ್ಬವಾಗಬಹುದು!

ಬೆಂಗಳೂರು
14 Feb 2020

ಭೂಮಿಯ ಮೇಲೆ ಪರಮಾಣು ಶಸ್ತ್ರಾಸ್ತ್ರಗಳ ದುರ್ಬಳಕೆ ಅತ್ಯಂತ ವಿನಾಶಕಾರಿಯಾಗಿದ್ದು ಅವುಗಳು  ಸ್ಫೋಟಗೊಂಡ ಸ್ಥಳದ ಸುತ್ತಮುತ್ತ 3 ಕಿಲೊಮೀಟರ್ ವ್ಯಾಪ್ತಿಯೊಳಗಿರುವ ಎಲ್ಲವನ್ನೂ ಸುಟ್ಟು ಭಸ್ಮ ಮಾಡುವಂತ ಶಕ್ತಿಯನ್ನು ಹೊಂದಿವೆ. ಈ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅಯಾನೀಕರಿಸುವ ವಿಕಿರಣಗಳು ನಿರ್ದಿಷ್ಟ  ಪ್ರದೇಶವನ್ನು ಹಾನಿಗೊಳಿಸುವ ಶಕ್ತಿಯನ್ನು ಹೊಂದಿದ್ದು, ದೀರ್ಘಾವಧಿಯಲ್ಲಿ ಆ ಪ್ರದೇಶವು ಬಾಧಿತಗೊಳ್ಳುವಂತೆ ಮಾಡುತ್ತವೆ ಅಲ್ಲದೇ ಆ ಇಡೀ ಪ್ರದೇಶವನ್ನು ವಾಸಕ್ಕೆ ಯೋಗ್ಯವಲ್ಲದಂತೆ ಮಾಡುತ್ತವೆ- ಎರಡನೇ ವಿಶ್ವ ಯುದ್ದದ ಸಂದರ್ಭದಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ನಡೆದ ದುರಂತ ಬಾಂಬ್ ಸ್ಫೋಟಗಳ ರೀತಿಯಲ್ಲಿಯೇ- ಆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ.