ಇ.ವಿ. ವಾಹನಗಳಲ್ಲಿ ಗ್ರಾಫೀನ್ ಬಳಸುವುದರಿಂದ ಬ್ಯಾಟರಿಯ ಚಾರ್ಜಿಂಗ್ ಸಮಯವನ್ನು ಶೇ 22ರಿಂದ 27ರಷ್ಟು ಕಡಿಮೆ ಮಾಡಬಹುದು. ಇದು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆಯನ್ನು ತಗ್ಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ ಗ್ರಾಫೀನ್ ಬ್ಯಾಟರಿಗಳು ವರದಾನವಾಗಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಗ್ರಾಫೀನ್‌ನ ಉತ್ಪಾದನೆಯೇ ಸದ್ಯದ ದೊಡ್ಡ ಸವಾಲು.

General

ಬೆಂಗಳೂರು

ಇ.ವಿ. ವಾಹನಗಳಲ್ಲಿ ಗ್ರಾಫೀನ್ ಬಳಸುವುದರಿಂದ ಬ್ಯಾಟರಿಯ ಚಾರ್ಜಿಂಗ್ ಸಮಯವನ್ನು ಶೇ 22ರಿಂದ 27ರಷ್ಟು ಕಡಿಮೆ ಮಾಡಬಹುದು. ಇದು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆಯನ್ನು ತಗ್ಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ ಗ್ರಾಫೀನ್ ಬ್ಯಾಟರಿಗಳು ವರದಾನವಾಗಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಗ್ರಾಫೀನ್‌ನ ಉತ್ಪಾದನೆಯೇ ಸದ್ಯದ ದೊಡ್ಡ ಸವಾಲು.

ಮುಂಬಯಿ

Novel scheme by IIT Bombay researchers to control drones can enable complex formation flying using only camera data, without GPS or inter-drone communication.

ಮುಂಬೈ

ಜೀವವನ್ನು ಉಳಿಸುವ ಔಷಧಗಳನ್ನು ಕಂಡುಹಿಡಿಯುವುದು ಒಂದು ದೀರ್ಘ ಮತ್ತು ಸವಾಲಿನ ಹಾದಿ. ಹೊಸ ಔಷಧವೊಂದನ್ನು ಮಾರುಕಟ್ಟೆಗೆ ತರಲು ಹಲವು ವರ್ಷಗಳ ಸಮಯ ಮತ್ತು ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಆದರೂ, ಶೇ. 90ರಷ್ಟು ಔಷಧಗಳು ಯಶಸ್ವಿಯಾಗದೆ ಪ್ರಯೋಗ ಹಂತದಲ್ಲೇ ವಿಫಲಗೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣ, ರೋಗದ ಮೇಲೆ ಪರಿಣಾಮ ಬೀರಬಲ್ಲ ಸೂಕ್ತ ಪ್ರೊಟೀನ್ ಗುರಿಯನ್ನು ಆರಂಭದಲ್ಲೇ ನಿರ್ಧಿಷ್ಟವಾಗಿ ಗುರುತಿಸಲು ವಿಜ್ಞಾನಿಗಳಿಗೆ ಇರುವ ಸವಾಲು. ಇದಕ್ಕೊಂದು ಪರಿಹಾರವಾಗಿ, ಮುಂಬೈನ ಐಐಟಿ ಬಾಂಬೆ ಸಂಸ್ಥೆಯ ವಿಜ್ಞಾನಿಗಳು ‘ಡ್ರಗ್‌ಪ್ರೊಟ್‌ಎಐ’ (DrugProtAI) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ನವೀನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ನವ ದೆಹಲಿ

ಕೇಂದ್ರ ಸರ್ಕಾರದ ಪ್ರಮುಖ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಟಿ ದೆಹಲಿ, ಜರ್ಮನಿಯ ಜೆನಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಒಂದು ಪ್ರಮುಖ ಸಂಶೋಧನೆಯನ್ನು ನಡೆಸಿ, ಕೃತಕ ಬುದ್ಧಿಮತ್ತೆ (AI) ಮತ್ತು ವಿಜ್ಞಾನದ ನಡುವಿನ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದೆ. ಈ ಅಧ್ಯಯನದಲ್ಲಿ, ಕೃತಕ ಬುದ್ಧಿಮತ್ತೆಯು ವಿಜ್ಞಾನಕ್ಷೇತ್ರಕ್ಕೆ ಪ್ರವೇಶಿಸಲು ಸಜ್ಜಾಗಿದೆಯೇ, ನಿಜವಾಗಿಯೂ ವಿಜ್ಞಾನಿಯಂತೆ ಯೋಚಿಸಬಲ್ಲದೇ ಎಂಬುದನ್ನು ಪರೀಕ್ಷಿಸಿದ್ದಾರೆ.

ಬೆಂಗಳೂರು

ನೀವು ಆರ್ಡರ್ ಮಾಡಿದ ವಸ್ತುಗಳು ಗಂಟೆಗಳ ಬದಲಿಗೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆಗೆ ತಲುಪಿದರೆ ಹೇಗಿರುತ್ತದೆ? ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಕನಸನ್ನು ನನಸು ಮಾಡಲು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಅವರು ಅಭಿವೃದ್ಧಿಪಡಿಸಿರುವ ಹೊಸ ಅಲ್ಗಾರಿದಮ್ (ಗಣಿತದ ಸೂತ್ರ), ಡ್ರೋನ್‌ಗಳ ಮೂಲಕ ವಸ್ತುಗಳನ್ನು ವೇಗವಾಗಿ ತಲುಪಿಸಲು ಸಹಾಯ ಮಾಡುತ್ತದೆ. ಇದು ಸೀಮಿತ ಬ್ಯಾಟರಿ ಸಾಮರ್ಥ್ಯ ಮತ್ತು ಕಡಿಮೆ ತೂಕದ ಪಾರ್ಸೆಲ್‌ಗಳನ್ನು ಮಾತ್ರ ಸಾಗಿಸುವ ಡ್ರೋನ್‌ಗಳ ಮಿತಿಗಳನ್ನು ಪರಿಗಣಿಸಿ ರೂಪಿಸಲಾಗಿದೆ.

ಬೆಂಗಳೂರು

ಭಾರತದ ಹಕ್ಕಿಗಳ ವೈವಿಧ್ಯ ತೀವ್ರ ಗತಿಯಿಂದ ಕ್ಷೀಣಿಸುತ್ತಿದೆ. ಅವನ್ನು ಉಳಿಸಲು, ತುರ್ತು ಸಂರಕ್ಷಣಾ ಕ್ರಮಗಳು ಅಗತ್ಯ ಎನ್ನುತ್ತದೆ ಇತ್ತೀಚೆಗೆ ಪ್ರಕಟವಾದ ಭಾರತೀಯ ಹಕ್ಕಿಗಳ ಸ್ಥಿತಿಗತಿಯ ಕುರಿತ ಒಂದು ಸಂಶೋಧನಾ ವರದಿ.

ಸೂರತ್

ಭಾರತದ ಆರ್ಥಿಕತೆಗೆ ಕೃಷಿಕ್ಷೇತ್ರ ಪ್ರಮುಖ ಆಧಾರ. ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಳೆಯನ್ನು ಬಿತ್ತುವ ಮೊದಲು ಅಥವಾ ಬೆಳವಣಿಗೆಯ ಆರಂಭದಲ್ಲೇ ಎಷ್ಟು ಇಳುವರಿ ನಿರೀಕ್ಷಿಸಬಹುದು ಎಂದು ತಿಳಿದರೆ, ಉತ್ಪಾದನೆ ಮತ್ತು ಲಾಭಗಳು ಹೆಚ್ಚುತ್ತವೆ. ಇದರಿಂದ ರೈತರು ನೀರು, ಗೊಬ್ಬರದಂತಹ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಬಹುದು ಮತ್ತು ಯಾವ ಬೆಳೆಗಳನ್ನು ಬೆಳೆಯಬೇಕು ಎಂದು ನಿರ್ಧರಿಸಬಹುದು.

ನವ ದೆಹಲಿ

ನೀವು ಎಂದಾದರೂ ಭೂಪಟದಲ್ಲಿ ಕರಾವಳಿ ರೇಖೆಯನ್ನು ನೋಡಿದಾಗ, ಅದರ ಆಕಾರ ಎಷ್ಟೆಲ್ಲಾ ಬಾಗಿದೆ ಎಂದು ಯೋಚಿಸಿದ್ದೀರಾ? ಅಂತಹ ಕರಾವಳಿಯ ಉದ್ದವನ್ನು ಅಳೆಯುವುದು ನಿಜಕ್ಕೂ ಒಂದು ಸವಾಲು. ಏಕೆಂದರೆ, ನೀವು ಕರಾವಳಿಯನ್ನು ಎಷ್ಟು ಸೂಕ್ಷ್ಮವಾಗಿ, ಎಷ್ಟು ಹತ್ತಿರದಿಂದ ನೋಡುತ್ತೀರಿ ಎನ್ನುವುದರ ಮೇಲೆ ಅದರ ಉದ್ದ ನಿರ್ಧಾರವಾಗುತ್ತದೆ!

ಇದನ್ನು ‘ಫ್ರ್ಯಾಕ್ಟಲ್’ ಎಂದು ಕರೆಯುವ ಗಣಿತದ ಪರಿಕಲ್ಪನೆಗೆ ಹೋಲಿಸಬಹುದು. ನೀವು ಹತ್ತಿರದಿಂದ ‘ಜೂಮ್’ ಮಾಡಿದಂತೆಲ್ಲಾ, ಹಿಂದೆ ಕಾಣಿಸದ ಹೊಸ ಹೊಸ ಸಣ್ಣ ಕೊಲ್ಲಿಗಳು, ಒಳಹರಿವುಗಳು ಮತ್ತು ಬಾಗಿದ ಪ್ರದೇಶಗಳು ಕಾಣಿಸಿಕೊಳ್ಳುತ್ತವೆ; ಇದರಿಂದ ಉದ್ದ ಹೆಚ್ಚಾಗುತ್ತ ಹೋಗುತ್ತದೆ.

Georgia

A new study finds that using humour to communicate about topics like AI increases a scientist's likeability and credibility.

Search Research Matters