ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯ (ಐಐಟಿ ಬಾಂಬೆ) ಪ್ರಾಧ್ಯಾಪಕರಾದ ಪ್ರೊ. ಅಮಿತ್ ಅರೋರಾ ಮತ್ತು ಸಂಗಡಿಗರು ದಾಳಿಂಬೆ ಬೀಜದಿಂದ ಎಣ್ಣೆಯನ್ನು ತೆಗೆಯುವ ನವೀನ ವಿಧಾನವನ್ನು ಪ್ರಸ್ಥಾಪಿಸಿದ್ದಾರೆ. ಈ ವಿಧಾನವು ಅತ್ಯoತ ಅಗ್ಗವಾಗಿಯೂ, ತ್ಯಾಜ್ಯ ರಹಿತವಾಗಿಯೂ ಇದ್ದು ಅತೀ ಹೆಚ್ಚು ಗುಣಮಟ್ಟದ ಪ್ರೋಟೀನ್ (ಸಸಾರಜನಕ ಆಹಾರ ಪದಾರ್ಥ) ಮತ್ತು ನಾರಿನ ಅಂಶ ನೀಡಬಲ್ಲದು.

Read time: 1 min

ಕಳೆದ ವಾರ, ಭಾರತೀಯ ಹವಾಮಾನ ಇಲಾಖೆಯು, ಈ ವರ್ಷದ ಮುಂಗಾರು ಸಾಮಾನ್ಯವಾಗಿರುತ್ತದೆ ಎಂದು ಊಹಿಸಿದೆ. ಆದರೆ ನಾವಿನ್ನೂ ಬೇಸಿಗೆಯ ತಿಂಗಳುಗಳಲ್ಲಿಯೇ ಇದ್ದೇವಲ್ಲವೇ? ನಮ್ಮ ರೈತರು ಬೀಜಗಳನ್ನು ಬಿತ್ತನೆ ಮಾಡಲು ಮತ್ತು ತಮ್ಮ ನೀರಾವರಿ ಸಂಪನ್ಮೂಲಗಳನ್ನು ಸನ್ನದ್ಧವಾಗಿಸಿಕೊಳ್ಳಲು, ನಾಗರಿಕ ಸೇವಾ ಅಧಿಕಾರಿಗಳು ಗೃಹಬಳಕೆ ಮತ್ತು ಕೈಗಾರಿಕಾ ಬಳಕೆಗಾಗಿ ನೀರಿನ ವಿತರಣೆಯನ್ನು ಯೋಜಿಸಲು ಈ ಮಾಹಿತಿ ಬೇಕು, ನಿಜ; ಆದರೆ ಸಮಯಕ್ಕೆ ಮುಂಚಿತವಾಗಿ ಈ ನಿಖರ ಊಹೆಯನ್ನು ಇಲಾಖೆಯ ವಿಜ್ಞಾನಿಗಳು ಹೇಗೆ ಮಾಡಿದರು? ಮುಂಗಾರಿನ ಮೇಲೆ ನಮ್ಮ ದೇಶದ ಹೆಚ್ಚಿನ ಜನರು ಅವಲಂಬಿತರಾಗಿರುವ ಕಾರಣ, ಅದರ ಆಗಮನದ ಊಹೆಯನ್ನು ನಿಖರವಾಗಿ ಮಾಡುವ ಕಲೆಯಲ್ಲಿ ವಿಜ್ಞಾನಿಗಳು ಪರಿಪೂರ್ಣರಾಗುವುದು ಅತ್ಯಾವಶ್ಯಕ.

Read time: 1 min

ಪಶ್ಚಿಮ ಘಟ್ಟ ಶ್ರೇಣಿ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಮಾನವ ಚಟುವಟಿಕೆಗಳು ಈ ಹಚ್ಚ ಹಸುರಿನ ಕಾಡುಗಳ ಉಳಿವಿಗೆ ಬೆದರಿಕೆ ಒಡ್ಡುತ್ತಿವೆ. ಇಂತಹ ಬದಲಾವಣೆಗಳನ್ನು ನಿಖರವಾಗಿ ತಿಳಿಯಲು ಸಂಶೋಧಕರು 40 ವರ್ಷಗಳಲ್ಲಿ ಸಸ್ಯವರ್ಗದ ಹೊದಿಕೆಯಲ್ಲಾದ ಬದಲಾವಣೆಗಳನ್ನು ಅಧ್ಯಯನ ಮಾಡಿದ್ದಾರೆ.

Read time: 1 min

ಮರೆಗುಳಿತನದ ಸಾಮಾನ್ಯ ವಿಧವಾಗಿರುವ ಅಲ್ಝೈಮರ್‌ ಅನ್ನು  ಔಷಧೋಪಚಾರದ ಸಹಾಯದಿಂದ ತಕ್ಕಮಟ್ಟಿಗೆ  ನಿಯಂತ್ರಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆದಿವೆ.

Read time: 1 min

ಗೆದ್ದಲು ಅಂದರೆ ಸಾಮಾನ್ಯವಾಗಿ ಎಲ್ಲರೂ ಪೀಠೋಪಕರಣ, ಬಾಗಿಲು ಕಿಟಕಿಗಳನ್ನು ಹಾಳುಗೆಡವುವ ಕೀಟ ಎಂದುಕೊಳ್ಳಬಹುದೇನೋ. ಆದರೆ, ಕೆಲವು ಬಗೆಯ ಗೆದ್ದಲುಗಳಿಗೆ ಸಿಗಬೇಕಾದ ಮೆಚ್ಚುಗೆ ಸಿಕ್ಕಿಲ್ಲ ಎಂಬುದು ಸತ್ಯ. ಏಕೆ ಗೊತ್ತೇ? ಅವು ಭೂಮಿಯ ಮೇಲಿನ ಮೊದಲ 'ರೈತರು' ಎಂಬುದು ಸಂಶೋಧನೆಯೊಂದರಿಂದ ಕಂಡುಬಂದಿದೆ; ಕೆಲವು ಬಗೆಯ ಗೆದ್ದಲುಗಳು, ತಮ್ಮದೇ ಆದ ಆಹಾರವನ್ನು ಬೆಳೆಯುತ್ತವೆಯಂತೆ! ಅವುಗಳ ತೋಟಗಳು ನಮ್ಮ ತೋಟಗಳಂತೆ ಇರುವುದಿಲ್ಲ ನಿಜ; ಆದರೆ ಆಹಾರಕ್ಕಾಗಿ ತಮ್ಮ ಗೂಡುಗಳಲ್ಲಿ ವಿವಿಧ ಬಗೆಯ ಶಿಲೀಂಧ್ರಗಳನ್ನು ಬೆಳೆಯುತ್ತವೆ. ಪ್ರತಿಯಾಗಿ, ಆ ಶಿಲೀಂಧ್ರಗಳ ಬೆಳವಣಿಗೆಗೆ ಸಹಾಯವಾಗಲೆಂದೇ ಹಲವು ಪದಾರ್ಥಗಳನ್ನು ಪೂರೈಕೆ ಮಾಡುತ್ತಾ ಪರಸ್ಪರ ಸಂಬಂಧವನ್ನು ಸುಲಲಿತಾಗಿ ನಿರ್ವಹಿಸುತ್ತವೆ.

Read time: 1 min

ಕಳೆದ ಕೆಲವು ದಶಕಗಳಲ್ಲಿ ಭಾರತದ ವಿಜ್ಞಾನ ಕ್ಷೇತ್ರವು ಅಪಾರ ವೇಗದಿಂದ ಔನತ್ಯದೆಡೆಗೆ ಮುನ್ನಡೆಯುತ್ತಿದ್ದು, ಇದರ ಹಿಂದಿರುವ ಕಾರಣ ಇಲ್ಲಿ ಯಥೇಚ್ಛವಾಗಿ ಲಭ್ಯವಿರುವ ಪ್ರತಿಭೆ ಮತ್ತು ಮೂಲಭೂತ ಸೌಕರ್ಯ. ಖಗೋಳಶಾಸ್ತ್ರದಿಂದ ಮೊದಲ್ಗೊಂಡು ಜೀವಶಾಸ್ತ್ರದವರೆಗೂ, ರಸಾಯನಶಾಸ್ತ್ರದಿಂದ ಕೃಷಿಯವರೆಗೂ ಎಲ್ಲಾ ವೈಜ್ಞಾನಿಕ ಕ್ಷೇತ್ರಗಳನ್ನೂ ಒಳಗೊಂಡಂತೆ ಹೆಮ್ಮೆ ಪಡಬೇಕಾದ ಹಲವಾರು ಸಾಧನೆಗಳು, ಅದರ ಹಿಂದಿನ ವಿಜ್ಞಾನಿಗಳು ಇಲ್ಲಿರುವುದು ಸಂತಸದ ಸತ್ಯ; ಆದರೆ ೨೦೧೭ ಹೇಗೆ ವಿಭಿನ್ನವಾಗಿತ್ತು? ಭಾರತೀಯ ವೈಜ್ಞಾನಿಕ ಸಮುದಾಯದಿಂದ ಕೆಲವು ಪ್ರಮುಖ ಸಂಶೋಧನಾ ಮುಖ್ಯಾಂಶಗಳು ಯಾವುವು? 

Read time: 6 mins