ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Ecology

Bengaluru
10 Feb 2022

ಉಷ್ಣವಲಯದ ಸವನ್ನಾಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲಿ ತಂಪೆನಿಸುವ ಎತ್ತರದ ಮರಗಳಿಲ್ಲದೇ ಇರಬಹುದು, ಆದರೆ ಎಲ್ಲಿನೋಡಿದರೂ ಹಸಿರು ಹುಲ್ಲು, ವಿವಿಧ ಚಿಟ್ಟೆಗಳೂ, ಕೀಟಗಳೂ, ಅವುಗಳನ್ನು ಹಿಡಿಯಲು ಅಡಗಿ ಕುಳಿತ ಹಕ್ಕಿಗಳೂ, ಹಾವು-ಹಲ್ಲಿ-ಓತಿಕೇತಗಳೂ ಕಾಣಸಿಗುತ್ತವೆ. ವಿಸ್ತಾರವಾದ ಹುಲ್ಲುಗಾವಲುಗಳಿಂದ ತುಂಬಿರುವ ಸವನ್ನಾಗಳನ್ನು, ಸಾಮಾನ್ಯವಾಗಿ ಪಾಳುಭೂಮಿಗಳು ಎಂದು ತಪ್ಪಾಗಿ ವರ್ಗೀಕರಿಸಲಾಗುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಈ ಉಷ್ಣವಲಯದ ಹುಲ್ಲುಗಾವಲೆಂಬ ಪರಿಸರ ವ್ಯವಸ್ಥೆಗಳು, ಹಲವು ಬಗೆಯಲ್ಲಿ ಅನನ್ಯವೆನಿಸಿದ್ದು, ಭೂಮಿಯ ಮೇಲೆ ಮತ್ತೆಲ್ಲಿಯೂ ಕಂಡುಬರದ ಹಲವಾರು ಸಸ್ಯಗಳಿಗೆ ನೆಲೆಯಾಗಿದೆ.

Bengaluru
15 Dec 2021

ಕಪ್ಪೆಗಳಿಗೆ ಔತಣ ಕೂಟವಾದ ಬತ್ತದ ಗದ್ದೆಗಳು
ಗದ್ದೆಯ ಕೀಟಕಗಳನ್ನು ನಿಯಂತ್ರಿಸಲು ಕಪ್ಪೆಗಳಲ್ಲಿದೆ ಅಪರೂಪದ ಪ್ರತಿಭೆ. 

Mumbai
6 Jan 2021

ಸ್ನೆಮಾಸ್ಪಿಸ್ ರಿಷಿವ್ಯಾಲಿಯೆನ್ಸಿಸ್ (ಫೋಟೋ:ಅಕ್ಷಯ್ ಖಾಂಡೇಕರ್)

Bengaluru
7 Oct 2020

ಆಗಸ್ಟ್ ೨೦೧೯ ರಲ್ಲಿ ಚೆನ್ನೈ ಕಡಲತೀರದ ಉದ್ದಕ್ಕೂ ‘ನೋಕ್ಟಿಲುಕಾ’ ಎಂಬ ಪ್ಲ್ಯಾಂಕ್ಟನ್ (ಪ್ರವಾಹಕ್ಕೆ ವಿರುದ್ಧವಾಗಿ ಈಜಲಾಗದ ಸಣ್ಣ ಸಣ್ಣ ಸಮುದ್ರಜೀವಿಗಳು)ನ ಹರಡುವಿಕೆ ಗೋಚರಿಸಿದ್ದು, ಅವು ಕತ್ತಲಿನಲ್ಲಿ ಆಕರ್ಷಕವಾದ ನಿಯಾನ್ ನೀಲಿ ಬಣ್ಣದಲ್ಲಿ ಪ್ರಕಾಶಿಸುತ್ತಿದ್ದವು. ನೋಡುಗರನ್ನು ಮೂಕವಿಸ್ಮಿತವಾಗಿಸುವ ಈ ಸಣ್ಣ ಜೀವಿಗಳ ಜೈವಿಕದೀಪ್ತಿಯು, ಅಲೆಗಳ ಮೇಲೆ ಬೆಳಕಿನ ನೃತ್ಯದಂತೆ ಕಂಡುಬರುತ್ತದೆ, ಈ ವಿದ್ಯಮಾನದ ಸುಂದರ ಛಾಯಾ ಚಿತ್ರಗಳನ್ನು ಜನರು ಯಥೇಚ್ಚವಾಗಿ ಹಂಚಿಕೊಂಡಿದ್ದಾರೆ. ಆದರೆ, ಸಮುದ್ರವನ್ನು ಹೊಳೆಯುವಂತೆ ಮಾಡುವ ಈ ‘ಬ್ಲೂಮ್ಸ್’ ಅಥವಾ ಈ ಜೀವಿಗಳ ತ್ವರಿತ ಹರಡುವಿಕೆಯು ಅಷ್ಟೇನೂ ಸಂತೋಷ ಕೊಡುವ ವಿಷಯವಲ್ಲ.

ಬೆಂಗಳೂರು
31 Jul 2020

ಮನುಷ್ಯ ತನ್ನ ನೂರಾರು ಆಸೆಗಳನ್ನು ಪೂರೈಸಿಕೊಳ್ಳುವ ಮತ್ತು ಆಧುನಿಕ ಜೀವನಶೈಲಿಯನ್ನು ಹೊಂದುವ ಭರಾಟೆಯಲ್ಲಿ ಅರಣ್ಯಗಳು/ಕಾಡುಗಳು ನಾಶವಾಗುತ್ತಿವೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದನ್ನು ತಗ್ಗಿಸಲು ಇರುವ ಪರಿಹಾರೋಪಾಯವೆಂದರೆ  ಗಿಡಗಳನ್ನು ಬೆಳೆಸಿ ಅವನತಿಗೊಳಗಾದ ಕಾಡುಗಳನ್ನು ಮರುಸ್ಥಾಪಿಸುವುದು. ಅರಣ್ಯಗಳಲ್ಲಿನ ವೃಕ್ಷಗಳು  ಹಸಿರುಮನೆ ಅನಿಲವಾದ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಂಡು ತನ್ನೊಳಗೆ ಹಾಗೂ ಮಣ್ಣಿನೊಳಗೆ ಸಂಗ್ರಹಿಸಿಟ್ಟುಕೊಳ್ಳಬಲ್ಲವು, ಹಾಗಾಗಿ ಯಾವುದೇ ಒಂದು ಪ್ರದೇಶದ ನೈಸರ್ಗಿಕ ಪರಿಸರದ ಸಮತೋಲನವನ್ನು ಕಾಪಾಡುವುದರಲ್ಲಿ ಮಹತ್ವವುಳ್ಳದ್ದಾಗಿರುವ ಗಿಡ ಮರಗಳನ್ನು ಬೆಳೆಸಿ ಕಾಡುಗಳನ್ನು ಮರುಸ್ಥಾಪಿಸುವಂತಹ ತಂತ್ರವನ್ನು ಹಲವು ಕಾರ್ಯಸೂಚಿಗಳು ಬಳಸುತ್ತಿವೆ.

Dharwad
23 Sep 2020

ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಪೂರ್ವ ಘಟ್ಟದ ಕ್ರಿಕೆಟ್ ಕಪ್ಪೆಯನ್ನು ಹೋಲುವ ವಿಭಿನ್ನ ಕಪ್ಪೆಯನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಬೆಂಗಳೂರು
14 Oct 2020

ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ  ಸ್ಥಳೀಯ ಸಸ್ತನಿ ಪ್ರಭೇದವಾದ ಸಿಂಗಳೀಕ (ಲಯನ್-ಟೈಲ್ಡ್ ಮಕಾಕ್.) [ಚಿತ್ರ ಕೃಪೆ: ಗಣೇಶ್ ರಘುನಾಥನ್]

ಎಚ್ಚರಿಕೆ: ಈ ಲೇಖನವು, ಕೆಲವು ಓದುಗರಿಗೆ ಕಿರಿಕಿರಿಯೆನಿಸಬಹುದಾದ ಗಾಯಗೊಂಡ ಪ್ರಾಣಿಗಳ ಚಿತ್ರಗಳನ್ನು ಒಳಗೊಂಡಿದೆ.

ಬೆಂಗಳೂರು
16 Sep 2020

ಹಸಿರು ಹುಲ್ಲುಗಾವಲುಗಳ, ಹೆಚ್ಚು ಸಮೃದ್ಧವಾಗಿರುವ ಆವಾಸಸ್ಥಾನಗಳ ಹುಡುಕಾಟದಲ್ಲಿ ಪ್ರಾಣಿಪಕ್ಷಿಗಳು, ಕಡಿಮೆ ಅನುಕೂಲಕರ ವಾತಾವರಣವನ್ನು ತೊರೆದು ಹೊರಡುತ್ತವೆ. ಸೆರೆಂಗೆಟಿಯ ಮಹಾ ವಲಸೆ, ಚಳಿಗಾಲದಲ್ಲಿ ಉಷ್ಣವಲಯದ ಕಡೆಗೆ ಸಾಗುವ ಪಕ್ಷಿಗಳು ಮತ್ತು ಬೆಳೆಗಳನ್ನು ನುಂಗಿ ಸ್ವಾಹಾ ಮಾಡಲು ದಾಳಿಯಿಡುವ ಲಕ್ಷಾಂತರ ಮಿಡತೆಗಳ ಹಿಂಡು - ಇವೆಲ್ಲಾ ಅಂತಹ ಚಲನೆಗೆ ಕೆಲವು ಉದಾಹರಣೆಗಳು. ಪರಿಚಿತ ಸ್ಥಳಗಳಿಗೆ ವಲಸೆ ಹೋಗುವುದು ಸುಲಭ; ಆದರೆ, ಅಪರಿಚಿತ ಪ್ರದೇಶಗಳಿಗೆ ದಾಂಗುಡಿ ಇಟ್ಟು, ನೆಲೆಗೊಳ್ಳುವುದು ಸವಾಲೇ ಸರಿ. ವಿಕಾಸದ ಹಾದಿಯಲ್ಲಿ, ಪ್ರಾಣಿಪಕ್ಷಿಕೀಟಗಳ ನಡವಳಿಕೆ ಮತ್ತು ಬದುಕುಳಿಯುವ ಸಾಧ್ಯತೆಗಳು, ಇಂತಹ ಸವಾಲುಗಳೊಂದಿಗೆ ಜೂಜುವುದರ ಮೂಲಕವೇ ರೂಪುಗೊಳ್ಳುತ್ತದೆ. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ಸಾಸ್ತ್ರಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವೊಂದರಲ್ಲಿ,  ಚಿಟ್ಟೆಗಳ ವಲಸೆಯ ಪ್ರಕ್ರಿಯೆಯಲ್ಲಿ ಇಂತಹ ಯಾವ ವಹಿವಾಟು ನಡೆಯುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.