Novel scheme by IIT Bombay researchers to control drones can enable complex formation flying using only camera data, without GPS or inter-drone communication.

General

ಬೆಂಗಳೂರು

ಗೆದ್ದಲುಗಳು ತಮ್ಮ ಸಾಮಾಜಿಕ ಸಂಘಟನೆ, ವಾಸ್ತುಶಿಲ್ಪ ವಿನ್ಯಾಸ ಸಾಮರ್ಥ್ಯಗಳಿಗೆ ಮತ್ತು ಕುಖ್ಯಾತವಾಗಿ ಕೀಟಗಳಾಗಿ ಹೆಸರುವಾಸಿ. ಆದಾಗ್ಯೂ, ಈ ವರೆಗೆ ವರ್ಣಿಸಲಾದ ಎಲ್ಲ ಪ್ರಭೇದಗಳು ಹಾನಿ ಉಂಟು ಮಾಡುವ ವರ್ಗಕ್ಕೆ ಸೇರುವುದಿಲ್ಲ. ಒಂದು ಕಡೆ ವಿಶ್ವದ ಗೆದ್ದಲು ಪ್ರಭೇದಗಳಲ್ಲಿ ಕೇವಲ 12.5% ​​ರಷ್ಟು ಮಾತ್ರ ಅಪಾರ ಆರ್ಥಿಕ ಹಾನಿಯನ್ನುಂಟುಮಾಡುವ ಕೀಟಗಳಾದರೆ, ಮತ್ತೊಂದೆಡೆ ಇವುಗಳ ಮಣ್ಣಿನಲ್ಲಿ ವಾಸಿಸುವ ಪ್ರತಿರೂಪಗಳು, ನೈಸರ್ಗಿಕ ಜಗತ್ತಿನಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ. ಇವು ಕಠಿಣ ಸಸ್ಯನಾರುಗಳನ್ನು ಕೊಳೆಸಲು ಅಥವಾ ಭಾಗಗಳಾಗಿ ವಿಭಜಿಸಲು ಸಹಾಯ ಮಾಡುತ್ತವೆ ಮತ್ತು ಪೋಷಕಾಂಶಗಳನ್ನು ಮಣ್ಣಿನಲ್ಲಿ ಮರುಬಳಕೆ ಮಾಡುತ್ತವೆ.

ಬೆಂಗಳೂರು

ನಾವೆಲ್ಲರೂ ಸಿಂಧೂ ನಾಗರಿಕತೆಯ ಬಗ್ಗೆ ಕೇಳಿದ್ದೇವೆ. ಸುಮಾರು ಕ್ರಿಸ್ತ ಪೂರ್ವ ಮೂರನೇ ಸಹಸ್ರಮಾನದ ಅವಧಿಯಲ್ಲಿ ಈ ಪುರಾತನ ಕಂಚಿನ ಯುಗದ ನಾಗರಿಕತೆಯು, ವಾಯುವ್ಯ ಏಷ್ಯಾದಲ್ಲಿ ಅಭಿವೃದ್ಧಿ ಹೊಂದಿತು. ಈ ನಾಗರಿಕತೆಯು ಉತ್ತಮವಾದ ಹಗೇವು (ಧಾನ್ಯಾಗಾರ)ಗಳು, ಒಳಚರಂಡಿ ವ್ಯವಸ್ಥೆ ಮತ್ತು ವ್ಯವಸ್ಥಿತವಾಗಿ ನಿರ್ಮಿಸಲಾಗಿದ್ದ ನಗರಗಳಾದ ಹರಪ್ಪಾ ಮತ್ತು ಮೊಹೆಂಜೊದಾರೊಗಳಿಗೆ ಪ್ರಸಿದ್ಧವಾಗಿದೆ. ಇದರ ಅಭಿವೃದ್ಧಿ ಮತ್ತು ಅವನತಿಗಳ ಬಗ್ಗೆ ವಿಸ್ತಾರವಾಗಿ ಗೊತ್ತಿಲ್ಲದಿದ್ದರೂ, ಇದರ ಕುರಿತಾದ ಅನೇಕ ಸಿದ್ಧಾಂತಗಳಿವೆ. ಈ ಕಾರಣಕ್ಕಾಗಿ ಇತಿಹಾಸಕಾರರು ಒಂದು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಬೆಂಗಳೂರು

ನಗರಗಳಲ್ಲಿ ಬದುಕುಳಿಯಲು, ನಗರವಾಸಿ ಹಲ್ಲಿಗಳು ತಮ್ಮ ಹಳ್ಳಿವಾಸಿ ಸಹೋದರರಿಗಿಂತ ಹೆಚ್ಚು ಬುದ್ಧಿವಂತಿಕೆ ಪ್ರದರ್ಶಿಸುವತ್ತ ಸಫಲವಾಗಿವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಒಂದು ಸಂಶೋಧನಾ ತಂಡದ  ಸಂಶೋಧನಾ ಫಲಿತಾಂಶವು ಸೂಚಿಸುತ್ತದೆ. 

ಬೆಂಗಳೂರು

ಈ ವರ್ಷದ ಬೇಸಿಗೆ ಕಾಲ, ಮಳೆಗಾಲದ ಅವಧಿಯಲ್ಲಿ ಭಾರತದ ಅನೇಕ ಪ್ರದೇಶಗಳು ಬರಗಾಲ ಮತ್ತು ಪ್ರವಾಹಗಳಿಂದ ತತ್ತರಿಸಿದವು. ನೀರಾವರಿಗಾಗಿ ಮಳೆಯ ಮೇಲೆ ಅವಲಂಬಿತವಾಗಿರುವ ದೇಶದಲ್ಲಿ (ವ್ಯತಿರಿಕ್ತ) ವಿನಾಶಕಾರಿ ಹವಾಮಾನದಿಂದಾಗಿ ಉಂಟಾಗುವ ಬೆಳೆಗಳ ನಷ್ಟವು ರೈತರಿಗೆ ತೊಂದರೆ ಉಂಟು ಮಾಡಿದೆ. ದೇಶದಲ್ಲಿ ವ್ಯವಸಾಯ ಯೋಗ್ಯ ಭೂಮಿಯ ಅರ್ಧದಷ್ಟು ಭಾಗ ಮಳೆಯ ಮೇಲೆ ಆಶ್ರಯಿಸಿರುವುದರಿಂದ, ಬೆಳೆಗಳು ಹವಾಮಾನದ ವೈಪರೀತ್ಯಗಳನ್ನು (ಅಸ್ಥಿರತೆಗಳನ್ನು) ಸಹಿಸಿಕೊಳ್ಳುವ ವಿಧಾನಗಳು ಅಗತ್ಯವಾಗಿದೆ.

ಬೆಂಗಳೂರು

ಪರ್ವತಾರೋಹಿಗಳ ಅಚ್ಚುಮೆಚ್ಚಿನ ಹಿಮಾಲಯದ ಹೂವುಗಳು, ಉತ್ಸಾಹಿ ಪರ್ವತಾರೋಹಿಗಳಿಂದ ಭಾರ ಹೊರುವ ಬಗ್ಗೆ ಪಾಠ ಕಲಿತಿರಬಹುದು! ಪರ್ವತಾರೋಹಿಗಳು ಎತ್ತರಕ್ಕೆ ಹೋದಾಗ, ಅಗತ್ಯವಾದ ವಸ್ತುಗಳನ್ನು ಮಾತ್ರ ಒಯ್ಯುತ್ತಾರೆ, ಮತ್ತು ಅಗತ್ಯವಿಲ್ಲದ, ಹೆಚ್ಚುವರಿ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಅಂತೆಯೇ, ಇಲ್ಲಿರುವ ಹೂವುಗಳು, ಪ್ರದೇಶ ಎತ್ತರವಾದಷ್ಟು,  ಅವುಗಳು ಗಾತ್ರದಲ್ಲಿ ಚಿಕ್ಕದಾಗುತ್ತವೆ, ಮತ್ತು ಅವುಗಳ ಸಣ್ಣ ಪರಾಗಸ್ಪರ್ಶಕಗಳಿಗೆ ತಕ್ಕಂತೆ ಕಡಿಮೆ ಮತ್ತು ಕೇಂದ್ರೀಕೃತವಾದ ಮಕರಂದವನ್ನು ಹಿಡಿದಿಟ್ಟುಕೊಳ್ಳುತ್ತವೆ. ಒಂದು ಬಗೆಯ ಹೂಬಿಡುವ, ಮರದಂತೆ ಇರುವ ಗಿಡಗಳಾದ ರೋಡೋಡೆಂಡ್ರಾನ್ ಗಳ  ಕುರಿತು ಇತ್ತೀಚಿನ ಒಂದು ಅಧ್ಯಯನವು ಇದರ ಮೇಲೆ ಬೆಳಕು ಚೆಲ್ಲುತ್ತದೆ.

ಬೆಂಗಳೂರು

ಸುಮಾರು ಮೂರು ದಶಕಗಳ ಹಿಂದೆ, ಜರ್ಮನಿಯ ಜೇನುನೊಣ ತಜ್ಞ ಕ್ಲಾಸ್ ವಾರ್ನ್ಕೆ ಅವರು ಭಾರತದ ಲಡಾಖ್ ನ ಸುಂದರವಾದ ಭೂದೃಶ್ಯದಿಂದ ಹೊಸ ಜಾತಿಯ ಕೋಗಿಲೆ-ಜೇನುನೊಣವನ್ನು ಪತ್ತೆ ಮಾಡಿ, ವರದಿ ಮಾಡಿದ್ದರು. ಅವರು ಎಪಿಯೋಲಸ್ ಕುಲಕ್ಕೆ ಸೇರಿದ ಈ ಸಣ್ಣ ಜೇನುನೊಣದ ರೂಪವಿಜ್ಞಾನವನ್ನು ಅಧ್ಯಯನ ಮಾಡಿ, ಅದಕ್ಕೆ ಲಡಾಖ್ ಅನುಗುಣವಾಗಿ, ಎಪಿಯೋಲಸ್ ಲಡಾಖೆನ್ಸಿಸ್ ಎಂದು ನಾಮಕರಣ ಮಾಡಿದರು. ದುರದೃಷ್ಟವಶಾತ್, 1993 ರಲ್ಲಿ ಅವರ ನಿಧನದ ನಂತರ, ಈ ಪ್ರಭೇದದ ಬಗೆಗಿನ ವಿವರಣೆಗಳು ಪ್ರಕಟವಾಗಲಿಲ್ಲ.

ಬೆಂಗಳೂರು

ಅಂಜೂರ ಮರದ ವಿತರಣೆಯು ಕಣಜಗಳ ಪ್ರಸರಣ ವಿಕಾಸದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ

ಮುಂಬೈ

ಶಾಲೆಯಲ್ಲಿ ಕಲಿಯಬೇಕಾದರೆ ಗಣಿತದ ತರಗತಿ ನೆನಪಿದೆಯೇ? ಗಣಿತ ನಮ್ಮಲ್ಲಿ ಬಹುಪಾಲು ಜನರಿಗೆ ಕಬ್ಬಿಣದ ಕಡಲೆಯಾಗಿತ್ತಲ್ಲವೇ? ಅರ್ಧಕ್ಕಿಂತ ಸೂತ್ರಗಳನ್ನು ಸುಮ್ಮನೆ ಬಾಯಿಪಾಠ ಮಾಡಿ ಪರಿಕ್ಷೆಯಲ್ಲಿ ಬರೆಯುತ್ತಿದ್ದುದು ನೆನಪಿದೆಯೇ? ಇಂತಹ ತಲೆನೋವಿನ ಸೂತ್ರಗಳಲ್ಲಿ ಗೋಳದ ಮೇಲ್ಮೈ ವಿಸ್ತೀರ್ಣದ ಸೂತ್ರವೂ ಸಹ ನಾವು ಬಾಯಿಪಾಠ ಮಾಡಿ ಬರೆದ ಸೂತ್ರಗಳಲ್ಲಿ ಒಂದು. ಆ ಅದ್ಭುತವಾದ ಸೂತ್ರಕ್ಕೆ ನಾವು ಹೇಗೆ ಬಂದಿದ್ದೇವೆ ಎಂಬುದರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೆ ನಾವು ಅದನ್ನು ವಿವಿಧ ಸಂದರ್ಭಗಳಲ್ಲಿ ಬಳಸಿದ್ದೇವೆ.

ಬೆಂಗಳೂರು

“ಬ್ಲಾಕ್ ಗೋಲ್ಡ್” ಅಥವಾ ಕಪ್ಪು ಚಿನ್ನವೆಂದೇ ಕರೆಯಲಾಗುವ ಮೆಣಸು, ಆರ್ಥಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಹೊಂದಿರುತ್ತದೆ. ಅಲ್ಲದೇ, ಇದರ ಬಗ್ಗೆ ಸಂಶೋಧನೆ ನಡೆಸಲು ಸಂಶೋಧಕರಿಗೆ ಇದು ಒಂದು ಒಳ್ಳೆಯ ವಿಷಯ. ಈ ಮೆಣಸಿನ ಭೌಗೋಳಿಕ ಮೂಲವನ್ನು ಪತ್ತೆ ಮಾಡಲು ಸಂಶೋಧಕರು ತೀವ್ರವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಭಾರತ ಹಾಗೂ ಗೋಂಡ್ವಾನ ಭೂರಾಶಿಗೆ ಐತಿಹಾಸಿಕ ಸಂಬಂಧವಿದೆಯೆಂದು ಈ ಭಾಗಗಳಿನ ಜೀವವೈವಿಧ್ಯತೆ, ಮುಖ್ಯವಾಗಿ ಪ್ರಭೇದಗಳಲ್ಲಿ ಇರುವ ಹೋಲಿಕೆಯೇ ಈ ಸಂಶೋಧನೆಗೆ ಮುಖ್ಯ ಕಾರಣ. ಅದರಲ್ಲೂ “ಪೈಪರ್” ಅಥವಾ “ಪೆಪ್ಪರ್”  ಪ್ರಭೇದಗಳು  ೬೬-೧೦೦.೫ ದಶಲಕ್ಷ ವರ್ಷಗಳ ಹಿಂದೆ ಈ ಎರಡೂ ಭೂರಾಶಿಗಳಲ್ಲಿ ಬೇರೂರಿವೆಯೆಂದು ಹೇಳಲಾಗಿದೆ.

Search Research Matters