Novel scheme by IIT Bombay researchers to control drones can enable complex formation flying using only camera data, without GPS or inter-drone communication.

General

ಬೆಂಗಳೂರು

ಪ್ರತಿಜೀವಕಗಳು 'ಸೂಪರ್ ಬಗ್' ಸರಣಿಯಲ್ಲಿ ಇದು ಕೊನೆಯ ಭಾಗ. ಇದರಲ್ಲಿ ರೋಗಗಳನ್ನು ಉಂಟುಮಾಡುವ ಬ್ಯಾಕ್ಟೇರಿಯಾಗಳಲ್ಲಿ ಪ್ರತಿಜೀವಕ ನಿರೋಧಕತೆ ಹೇಗೆ ಕಂಡುಬರುತ್ತದೆ, ಅದಕ್ಕೆ ಕಾರಣಗಳು ಮತ್ತು ಅದರಿಂದ ಉಂಟಾಗಬಹುದಾದ ತೀವ್ರತೆಯ ಬಗ್ಗೆ ತಿಳಿಯಬಹುದು. 

ಬೆಂಗಳೂರು

ಈ ಲೇಖನ ಸರಣಿಯಲ್ಲಿ 'ದುರುಪಯೋಗಪಡಿಸಿಕೊಳ್ಳಲಾದ' ಪ್ರತಿಜೀವಕಗಳು 'ಸೂಪರ್ ಬಗ್'ಗಳಿಗೆ ಹೇಗೆ ಸಹಾಯ ಮಾಡುತ್ತಿವೆ ಮತ್ತು ನಾವೇಕೆ ಪ್ರತಿಜೀವಕಗಳನ್ನು ದುರುಪಯೋಗ ಪಡಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ವಿವರಗಳನ್ನು ನೀಡುತ್ತೇವೆ.

Bengaluru

ಭಾರತದ ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ತಲಾ ಒಂದೊಂದು ಹೊಸ ಜಾತಿಯ ಚಿಮ್ಮಂಡೆ ಕಪ್ಪೆಗಳನ್ನು ಭಾರತೀಯ ವನ್ಯಜೀವಿ ಸಂಸ್ಥೆ, ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆ ಮತ್ತು ಉತ್ತರ ಒರಿಸ್ಸಾ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.

ಬೆಂಗಳೂರು

ಸೂಪರ್ ಬಗ್ ಸರಣಿ - ಭಾಗ ೧

ಬ್ಯಾಕ್ಟೀರಿಯಾದಿಂದ ಉಂಟಾಗುವ ಪ್ರತಿಜೀವಕ ನಿರೋಧಕತೆಯ ಬಗ್ಗೆ ಮೂರು ಭಾಗಗಳಲ್ಲಿ ಮೂಡಲಿದೆ. ಮೊದಲ ಭಾಗದಲ್ಲಿ ಅದರ ಕಾರಣಗಳು, ಪ್ರತಿಜೀವಕ ನಿರೋಧಕತೆಯಿಂದ ಉಂಟಾಗುವ ತೊಂದರೆಗಳು ಹಾಗು ಭಾರತದಲ್ಲಿ ಈ ಸಮಸ್ಯೆಯ ತೀವ್ರತೆಯ ಬಗ್ಗೆ ತಿಳಿಯಬಹುದು.

ಬೆಂಗಳೂರು

ಈ ವರ್ಷದ ‘ವಿಶ್ವ ಪರಿಸರ ದಿನ’ದ ಅಂಗವಾಗಿ ‘‘ಪ್ಲಾಸ್ಟಿಕ್ಕಿನಿಂದ ಮಾಲಿನ್ಯ ತಡೆಗಟ್ಟೋಣ’’ ಎಂದು ವಿಶ್ವ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಘೋಷಿಸಿದೆ. ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಅದರ ಬಗ್ಗೆ ಸರಿಯಾದ ಅರಿವು ಅತ್ಯವಶ್ಯಕ. 

ಬೆಂಗಳೂರು

ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಕಿನ್ಸನ್ ಮುಂತಾದ ಸಾಂಕ್ರಾಮಿಕವಲ್ಲದ ರೋಗಗಳು, ಅಂದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡದ ರೋಗಗಳು, ಇಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ಸವಾಲುಗಳಾಗಿವೆ. ಭಾರತದಲ್ಲಿ, ಸುಮಾರು ಮೂವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡವಿರುತ್ತದೆ ಮತ್ತು ೮% ರಷ್ಟು ಜನರಿಗೆ ಮಧುಮೇಹ ಇರುತ್ತದೆ ಎಂದು ತಿಳಿದುಬಂದಿದೆ. ದಿನೇದಿನೇ ಹೆಚ್ಚುತ್ತಿರುವ ಈ ಸಮಸ್ಯೆಯನ್ನು ಬಗೆಹರಿಸುವ ಮಾರ್ಗವೆಂದರೆ, ಸರ್ಕಾರದ ಬೆಂಬಲದೊಂದಿಗೆ ಬಲವಾದ ಆರೋಗ್ಯ ಸೇವೆ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಅದರ ಮುಖಾಂತರ, ಇಂತಹ ಖಾಯಿಲೆಗಳಿಗೆ ಔಷಧಿಗಳನ್ನು ಎಲ್ಲರಿಗೂ ಸುಲಭವಾಗಿ, ಕಡಿಮೆ ದರದಲ್ಲಿ ಲಭ್ಯವಿರುವಂತೆ ಮಾಡುವುದು.

ಬೆಂಗಳೂರು

ಶುಷ್ಕ ಹುಲ್ಲುಗಾವಲುಗಳು ಮತ್ತು ರಸಭರಿತ ಸಸ್ಯಗಳನ್ನುಳ್ಳ ಮರುಭೂಮಿಗಳು - ಇವೆಲ್ಲಾ ಒಣ ಭೂಪರಿಸರ ವ್ಯವಸ್ಥೆಗಳು ಎನಿಸಿಕೊಳ್ಳುತ್ತವೆ; ಭೂಮಿಯ ಮೇಲ್ಮೈಯ ಸುಮಾರು ೪೦% ಸ್ಥಳವನ್ನು ಇವೇ ಆವರಿಸಿಕೊಂಡಿವೆ. ಸಾಮಾನ್ಯವಾಗಿ ಇವನ್ನು ಜನರು 'ತ್ಯಾಜ್ಯಭೂಮಿಗಳು' ಎಂದು ಕಡೆಗಣಿಸಿದರೂ, ಪರಿಸರ ಸಮತೋಲನದಲ್ಲಿ ಇವು ಕೂಡ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತವೆ; ಈ ಒಣ ಭೂಪರಿಸರ ವ್ಯವಸ್ಥೆಯು ನೀರಿನ ಕೊರತೆಯಿರುವ ಪರಿಸರಕ್ಕೆ ಹೊಂದಿಕೊಳ್ಳುವ ವಿಶಿಷ್ಟ ಸಸ್ಯಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿರುತ್ತವೆ. 

ಪುಣೆ

ಕಳೆದ ವಾರ, ಭಾರತೀಯ ಹವಾಮಾನ ಇಲಾಖೆಯು, ಈ ವರ್ಷದ ಮುಂಗಾರು ಸಾಮಾನ್ಯವಾಗಿರುತ್ತದೆ ಎಂದು ಊಹಿಸಿದೆ. ಆದರೆ ನಾವಿನ್ನೂ ಬೇಸಿಗೆಯ ತಿಂಗಳುಗಳಲ್ಲಿಯೇ ಇದ್ದೇವಲ್ಲವೇ? ನಮ್ಮ ರೈತರು ಬೀಜಗಳನ್ನು ಬಿತ್ತನೆ ಮಾಡಲು ಮತ್ತು ತಮ್ಮ ನೀರಾವರಿ ಸಂಪನ್ಮೂಲಗಳನ್ನು ಸನ್ನದ್ಧವಾಗಿಸಿಕೊಳ್ಳಲು, ನಾಗರಿಕ ಸೇವಾ ಅಧಿಕಾರಿಗಳು ಗೃಹಬಳಕೆ ಮತ್ತು ಕೈಗಾರಿಕಾ ಬಳಕೆಗಾಗಿ ನೀರಿನ ವಿತರಣೆಯನ್ನು ಯೋಜಿಸಲು ಈ ಮಾಹಿತಿ ಬೇಕು, ನಿಜ; ಆದರೆ ಸಮಯಕ್ಕೆ ಮುಂಚಿತವಾಗಿ ಈ ನಿಖರ ಊಹೆಯನ್ನು ಇಲಾಖೆಯ ವಿಜ್ಞಾನಿಗಳು ಹೇಗೆ ಮಾಡಿದರು? ಮುಂಗಾರಿನ ಮೇಲೆ ನಮ್ಮ ದೇಶದ ಹೆಚ್ಚಿನ ಜನರು ಅವಲಂಬಿತರಾಗಿರುವ ಕಾರಣ, ಅದರ ಆಗಮನದ ಊಹೆಯನ್ನು ನಿಖರವಾಗಿ ಮಾಡುವ ಕಲೆಯಲ್ಲಿ ವಿಜ್ಞಾನಿಗಳು ಪರಿಪೂರ್ಣರಾಗುವುದು ಅತ್ಯಾವಶ್ಯಕ.

Kodaikanal

ಪಶ್ಚಿಮ ಘಟ್ಟ ಶ್ರೇಣಿ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಮಾನವ ಚಟುವಟಿಕೆಗಳು ಈ ಹಚ್ಚ ಹಸುರಿನ ಕಾಡುಗಳ ಉಳಿವಿಗೆ ಬೆದರಿಕೆ ಒಡ್ಡುತ್ತಿವೆ. ಇಂತಹ ಬದಲಾವಣೆಗಳನ್ನು ನಿಖರವಾಗಿ ತಿಳಿಯಲು ಸಂಶೋಧಕರು 40 ವರ್ಷಗಳಲ್ಲಿ ಸಸ್ಯವರ್ಗದ ಹೊದಿಕೆಯಲ್ಲಾದ ಬದಲಾವಣೆಗಳನ್ನು ಅಧ್ಯಯನ ಮಾಡಿದ್ದಾರೆ.

ನೀವು ಎಂದಾದರೂ ಬೇಸಿಗೆಯ ಹಗಲಿನಲ್ಲಿ, ಬಿರುಬಿಸಿಲಿನ ಆಕಾಶವನ್ನು ಬರಿಗಣ್ಣಿನಿಂದ ನಿಟ್ಟಿಸಿದ್ದೀರಾ? ಆಕಾಶದಲ್ಲಿ ನಿಮ್ಮ ದೃಷ್ಟಿ ನೆಟ್ಟಿರುವಾಗ, ಏನೋ ಕಣ್ಣಿನ ಮುಂದೆ ತೇಲಿದಂತೆ ಭಾಸವಾಗಿದ್ದು ಗಮನಿಸಿದ್ದೀರಾ? ಹೀಗೆ ಬೆಳಕನ್ನು ನಿಟ್ಟಿಸಿ ನೋಡುವಾಗ ಕಣ್ಣಿನ ದೃಷ್ಟಿ ಕ್ಷೇತ್ರದಲ್ಲಿ ಏನೋ ಈಜಿದಂತೆ ಎನಿಸುತ್ತದೆ ಅಲ್ಲವೇ? ಇವು ಪಾರದರ್ಶಕವಾದ ಹುಳುಗಳೋ ಅಥವಾ ಯಾವುದೋ ಆತ್ಮವೋ ಎಂದು ಸಾಮಾನ್ಯವಾಗಿ ಜನ ಭಾವಿಸುತ್ತಾರಂತೆ. ಅವು ಕಣ್ಣೀರ ಹನಿಗಳೇನೋ ಎಂದು ನೀವು ಅವನ್ನು ಗಮನಿಸಲು ಪ್ರಾರಂಭಿಸಿದಾಗ, ಅವು ಕಣ್ಮರೆಯಾಗಿ, ನೀವು ನಿಮ್ಮ ನೋಟವನ್ನು ಬದಲಾಯಿಸಿದ ತಕ್ಷಣ ಮತ್ತೆ ಕಾಣಿಸಿಕೊಳ್ಳುತ್ತವೆ.

Search Research Matters